Thursday, November 17, 2011

ಸೃಷ್ಟಿ

ಬಾಳಿಗೆ ಹುಮ್ಮಸ್ಸು,ಸ್ಫೂರ್ತಿ, ಅರ್ಥವನ್ನು  ಚೈತನ್ಯವು ಕೊಡುತ್ತದೆ..ಚೈತನ್ಯವು ಸೃಷ್ಟಿಯಿಂದ ಹುಟ್ಟುತ್ತದೆ..ಸೃಷ್ಟಿಗೆ ಕಾಯಬೇಕು,ಕನಸಬೇಕು,ನೋಯಬೇಕು,ಅನುಭವಿಸಬೇಕು..ಮೇಲಾಗಿ ಸಮಯವನ್ನು ನೀಡಬೇಕು..ಸೃಷ್ಟಿ ತಪಸ್ಸು..ಅದು ಪರಿಶ್ರಮವನ್ನು ನಿರೀಕ್ಷಿಸುತ್ತದೆ...
ಆಲಸ್ಯ ಸೃಷ್ಟಿಯ ಶತ್ರು..
ಕಳೆದು ಹೋದ, ನೆನಪಿಗೆ ಬಾರದ ದಿನಗಳ ಹಿಂದೆ ನಮ್ಮ ಆಲಸ್ಯ ನಿಂತಿರುತ್ತದೆ..
ಅಚ್ಚಳಿಯದ ನೆನಪುಗಳ ಜೊತೆ ಯಾವುದೋ ಸೃಷ್ಟಿ ಇರುತ್ತದೆ..
ಸೃಜನಶೀಲತೆ ಸೃಷ್ಟಿಗೆ ಮೂಲ..
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ? ಯಾವೊನಿಗೊತ್ತು?

No comments: