ಸದಾ ಓಡುವ ನಾವು, ಏನೂ ಮಾಡದೇ ಇರುವುದು ಅಪರಾಧ ಎಂಬಂತೆ ಪರಿಗಣಿಸುತ್ತೇವೆ.
ಓದಬೇಕು, ದುಡಿಯ ಬೇಕು, ಪ್ರಪಂಚ ನೋಡಬೇಕು, ದುಡ್ಡು ಮಾಡಬೇಕು, ಪ್ರೀತಿಸಬೇಕು, ನೋಯಬೇಕು, ಕಾಯಬೇಕು, ಕೊರಗಬೇಕು - ಒಟ್ಟಿನಲ್ಲಿ ಏನೋ ಒಂದು ಮಾಡುತ್ತಿರಬೇಕು.ಕ್ರಿಯಾಶೀಲತೆ ಇಲ್ಲದೆ ದಿನಗಳು ನಮ್ಮ ಬದುಕಿನಲ್ಲಿ ಕಳೆದು ಹೋದ ಅಮೂಲ್ಯ ಘಳಿಗೆಗಳು.
ಆದರೆ ಏನೂ ಮಾಡದೆ, ಹೊರಗೆ ಬೀಳುವ ತುಂತುರು ಮಳೆಯನ್ನೂ ನೋಡುತ್ತಾ ಕೂರುವುದು ಯಾವ ಪುರುಶಾರ್ಥವನ್ನು ಸಾಧಿಸದೆ ಇದ್ದರೂ ಒಂದು ಖುಷಿಯನ್ನು ಕೊಡುತ್ತದೆ.ಕೊರೆಯುವ ಛಳಿಯ ಮುಂಜಾನೆ ಏನೂ ಮಾಡದೆ ಬೆಚ್ಚಗೆ ಹೊದ್ದುಕೊಂಡು ಮಲಗಿದರೆ ಅದು ಒಂದು ದಿವ್ಯ ಆನಂದವನ್ನು ನೀಡುತ್ತದೆ.
ಬದುಕಿನ ಸಣ್ಣ ಸುಖಗಳನ್ನು ಮರೆಯುವುದು ಬೇಡ. ಏನೂ ಮಾಡದೇ ಇರುವುದು ಒಂದು ಸೌಖ್ಯ.ಅದರಲ್ಲೂ ಒಂದು ಮಜವಿದೆ!
ಅಂದಹಾಗೆ ಇಲ್ಲಿ ಈಗ ಚಳಿಗಾಲ :)
ಓದಬೇಕು, ದುಡಿಯ ಬೇಕು, ಪ್ರಪಂಚ ನೋಡಬೇಕು, ದುಡ್ಡು ಮಾಡಬೇಕು, ಪ್ರೀತಿಸಬೇಕು, ನೋಯಬೇಕು, ಕಾಯಬೇಕು, ಕೊರಗಬೇಕು - ಒಟ್ಟಿನಲ್ಲಿ ಏನೋ ಒಂದು ಮಾಡುತ್ತಿರಬೇಕು.ಕ್ರಿಯಾಶೀಲತೆ ಇಲ್ಲದೆ ದಿನಗಳು ನಮ್ಮ ಬದುಕಿನಲ್ಲಿ ಕಳೆದು ಹೋದ ಅಮೂಲ್ಯ ಘಳಿಗೆಗಳು.
ಆದರೆ ಏನೂ ಮಾಡದೆ, ಹೊರಗೆ ಬೀಳುವ ತುಂತುರು ಮಳೆಯನ್ನೂ ನೋಡುತ್ತಾ ಕೂರುವುದು ಯಾವ ಪುರುಶಾರ್ಥವನ್ನು ಸಾಧಿಸದೆ ಇದ್ದರೂ ಒಂದು ಖುಷಿಯನ್ನು ಕೊಡುತ್ತದೆ.ಕೊರೆಯುವ ಛಳಿಯ ಮುಂಜಾನೆ ಏನೂ ಮಾಡದೆ ಬೆಚ್ಚಗೆ ಹೊದ್ದುಕೊಂಡು ಮಲಗಿದರೆ ಅದು ಒಂದು ದಿವ್ಯ ಆನಂದವನ್ನು ನೀಡುತ್ತದೆ.
ಬದುಕಿನ ಸಣ್ಣ ಸುಖಗಳನ್ನು ಮರೆಯುವುದು ಬೇಡ. ಏನೂ ಮಾಡದೇ ಇರುವುದು ಒಂದು ಸೌಖ್ಯ.ಅದರಲ್ಲೂ ಒಂದು ಮಜವಿದೆ!
ಅಂದಹಾಗೆ ಇಲ್ಲಿ ಈಗ ಚಳಿಗಾಲ :)
No comments:
Post a Comment